Date of Event:12-11-2025
ಮನ್ವಂತರ 2025 – 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ
ಸಂತ ಫ್ರಾನ್ಸಿಸ್ ಕಾಲೇಜು, ಕೋರಮಂಗಲ ಬೆಂಗಳೂರು-34 ದಿನಾಂಕ: 12-11-2025 ರಂದು ಕನ್ನಡ ವಿಭಾಗ ಮತ್ತು ಸಾಂಸ್ಕೃತಿಕ ಸಮಿತಿ ಹಾಗೂ ವಿದ್ಯಾರ್ಥಿ ಪರಿಷತ್ ಸಹಯೋಗದೊಂದಿಗೆ 70ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀಯುತ ಎಲ್. ಎನ್ ಮುಕುಂದರಾಜ್, (ಅಧ್ಯಕ್ಷರು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಸಾಹಿತಿಗಳು, ಕವಿಗಳು, ಚಿಂತಕರು, ವಿಮರ್ಶಕರು, ಬರಹಗಾರರು ಹಾಗೂ ಚಲನ ಚಿತ್ರ ನಿರ್ದೇಶಕರು). ಭಾಗವಹಿಸಿ ಕನ್ನಡ ನಾಡು ನುಡಿ ಪ್ರಾಧಾನ್ಯತೆ ಹಾಗೂ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು. ಗೌರವಾನ್ವಿತ ಬ್ರದರ್ ಡಾ. ಟೈಟಸ್ ಆಂಟೊ, ನಿರ್ದೇಶಕರು, ಡಾ. ಆರ್. ಎನ್. ಸುಬ್ಬರಾವ್, ಪ್ರಾಂಶುಪಾಲರು, ಡಾ. ಕಾರ್ತಿಕ್ ಪಿ. ಪ್ರಾಂಶುಪಾಲರು, ಸಂತ ಫ್ರಾನ್ಸಿಸ್ ಸಂಜೆ ಕಾಲೇಜು, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಸಂತೋಷ್ ಕುಮಾರ್ ಆರ್. ಎಂ., ಹಾಗೂ ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿ ವೃಂದದವರೊಂದಿಗಿನ ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ಯಶಸ್ವಿಯುತವಾಗಿ ನಡೆಯಿತು.



.webp)

PB.NO. 3417, 3rd Block, 8th Main,
Koramangala Bengaluru - 560034
Mob : 080-25531037 / 9449260409 / 9481857854
Email : info@stfranciscollege.edu.in